ಮೈಸೂರು ದಸರಾ ಉತ್ಸವದಲ್ಲಿ ಆನೆಗಳು ಅವಿಭಾಜ್ಯ ಅಂಗವಾಗಿದೆ. ವಿಜಯದಶಮಿಯ ದಿನದಂದು ಮೈಸೂರು ದಸರಾ ಮೆರವಣಿಗೆಯ ಮೂಲ ಆಕರ್ಷಣೆ ಆನೆಗಳಾಗಿವೆ. ಮುಖ್ಯ ಆನೆಯು ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತೊಯ್ಯುತ್ತದೆ. ಅಂಬಾರಿಯು ೭೫೦ ಕಿಲೋಗ್ರಾಂಗಳಷ್ಟು ತೂಕದ್ದಾಗಿದ್ದು, ಸಂಪೂರ್ಣವಾಗಿ ಚಿನ್ನದಿಂದ ಮಾಡಲ್ಪಟ್ಟಿದೆ. == ಆಗಮನ == ಆನೆಗಳು ಗುಂಪು ಗುಂಪಾಗಿ ಮೈಸೂರು ನಗರಕ್ಕೆ ಬರಲಾರಂಭಿಸುತ್ತವೆ. ಆನೆಗಳ ಜೊತೆಯಲ್ಲಿ ಆಯಾ ಪಾಲಕರು ಅಥವಾ ಮಾವುತರು ಇರುತ್ತಾರೆ . ಅವು ಉತ್ಸವಗಳು ಪ್ರಾರಂಭವಾಗುವ ಒಂದು ತಿಂಗಳ ಮೊದಲು ಮೈಸೂರಿಗೆ ಆಗಮಿಸುತ್ತವೆ ಮತ್ತು ಅಂತಿಮ ದಿನದ ಮೆರವಣಿಗೆಗಾಗಿ ಮಾವುತರು ಅವುಗಳಿಗೆ ಅಭ್ಯಾಸ ಮಾಡಿಸುತ್ತಾರೆ. ಆನೆಗಳನ್ನು ಸಾಮಾನ್ಯವಾಗಿ ಟ್ರಕ್‌ಗಳಲ್ಲಿ ತರಲಾಗುತ್ತದೆ. ಕೆಲವೊಮ್ಮೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ತಮ್ಮ ನೆಲೆಯಿಂದ ಮೈಸೂರಿಗೆ ೭೦-ಕಿಮೀ ದೂರದಲ್ಲಿ ನಡೆದುಕೊಂಡು ಕರೆತರಲಾಗುತ್ತದೆ. ಹಳ್ಳಿಗರು ತಮ್ಮ ಗೊತ್ತುಪಡಿಸಿದ ಟ್ರೆಕ್ಕಿಂಗ್ ಮಾರ್ಗದ ಉದ್ದಕ್ಕೂ ಆನೆಗಳನ್ನು ಸ್ವಾಗತಿಸುತ್ತಾರೆ. ಅರಣ್ಯದಿಂದ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಅರಣ್ಯ ಚೆಕ್‌ಪೋಸ್ಟ್‌ಗೆ ಪ್ರತಿ ಆನೆಗಳ ತಂಡ ಆಗಮಿಸುತ್ತಿದ್ದಂತೆ ಜಿಲ್ಲಾ ಸಚಿವರು, ಮೈಸೂರು ಭಾಗದ ಅಧಿಕಾರಿಗಳು ಹಾಗೂ ಪ್ರಮುಖರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಅವುಗಳನ್ನು ಬರಮಾಡಿಕೊಳ್ಳುವರು. ಆನೆಗಳನ್ನು ಸ್ವಾಗತಿಸಲು ಗ್ರಾಮಸ್ಥರು ಜಾನಪದ ನೃತ್ಯಗಳನ್ನು ಮಾಡಿ ಡ್ರಮ್ ಬಾರಿಸುತ್ತಾರೆ ಮತ್ತು ಹಾಡುಗಳನ್ನು ಹಾಡುತ್ತಾರೆ. ಇದು ಮೈಸೂರು ಮಹಾರಾಜರ ರಾಜ ಪರಂಪರೆಗೆ ಅನುಗುಣವಾಗಿದೆ. == ಹಬ್ಬ == ಆಯಾ ಶಿಬಿರಗಳಲ್ಲಿ ಆನೆಗಳಿಗೆ ರಾಗಿಮುದ್ದೆಯನ್ನು, (ಇದು ರಾಗಿ ಮತ್ತು ಹುರುಳಿ ಕಾಳಿನ ಮಿಶ್ರಣವಾಗಿದೆ). ಆದರೆ ಅವು ರಾಜಮನೆತನದ ಮೈಸೂರಿನಲ್ಲಿ ರಾಜಮನೆತನದ ಅತಿಥಿಗಳಾಗಿ ದಸರಾಕ್ಕೆ ತಯಾರಿ ನಡೆಸುತ್ತಿರುವಾಗ, ಅವುಗಳಿಗೆ ದಸರಾ ಮುಕ್ತಾಯದವರೆಗೆ ಅಂದರೆ ಜಂಬೂ ಸವಾರಿಯವರೆಗೆ ರಾಜಾತಿಥ್ಯವನ್ನು ನೀಡಲಾಗುತ್ತದೆ. ಆನೆಗಳು ಬೆಳಿಗ್ಗೆ ಮತ್ತು ಸಂಜೆ ಉದ್ದಿನ ಬೇಳೆ (ಕಪ್ಪು), ಹಸಿಬೇಳೆ, ಗೋಧಿ, ಬೇಯಿಸಿದ ಅಕ್ಕಿ, ಈರುಳ್ಳಿ ಮತ್ತು ತರಕಾರಿಗಳನ್ನು ತಿನ್ನುತ್ತವೆ. ಅವು ತಮ್ಮ ನಿಯಮಿತ ಅಭ್ಯಾಸದಿಂದ ಹಿಂದಿರುಗಿದ ನಂತರ ಆಹಾರಕ್ಕೆ ರುಚಿಯನ್ನು ಸೇರಿಸಲು ಅಕ್ಕಿ, ಕಡಲೆಕಾಯಿ, ತೆಂಗಿನಕಾಯಿ, ಬೆಲ್ಲ ಮತ್ತು ಕಬ್ಬುಗಳನ್ನು ಸೇರಿಸುತ್ತಾರೆ. ಈ ಆಹಾರವನ್ನು ದಿನಕ್ಕೆ ಎರಡು ಬಾರಿ ನೀಡಲಾಗುತ್ತದೆ. ಅವುಗಳಿಗೆ ಆಲದ ಎಲೆಗಳಂತೆ ಕವಲು ಮೇವು ಕೂಡ ಸಿಗುತ್ತದೆ. ಜಂಬೂಗಳಿಗೆ ಆಹಾರ ಬಡಿಸುವಾಗ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಆನೆಗಳ ದೈಹಿಕ ಸಾಮರ್ಥ್ಯವನ್ನು ಸುಧಾರಿಸಲು ಹೆಚ್ಚಿನ ಕ್ಯಾಲೋರಿ ಮತ್ತು ಪ್ರೋಟೀನ್ ಭರಿತ ಆಹಾರವನ್ನು ನೀಡಲಾಗುತ್ತದೆ. ಬೆಳಿಗ್ಗೆ ಬಡಿಸುವ ಆಹಾರವು ಸುವಾಸನೆಗಾಗಿ ಶುದ್ಧ ಬೆಣ್ಣೆಯಿಂದ ಕೂಡಿರುತ್ತದೆ. ಪೌಷ್ಠಿಕಾಂಶದ ಆಹಾರದ ಜೊತೆಗೆ, ಆಹಾರವನ್ನು ಸಮತೋಲನಗೊಳಿಸಲು ವಿಟಮಿನ್ ಔಷಧಿಗಳನ್ನು ನೀಡಲಾಗುತ್ತದೆ . ಆನೆ ಕಾಡಿನಲ್ಲಿ ಒಂದು ದಿನದಲ್ಲಿ ೪೦೦ ಕಿಲೋಗ್ರಾಂಗಳಷ್ಟು ಮೇವನ್ನು ತಿನ್ನುತ್ತದೆ. ಮೈಸೂರಿನಲ್ಲಿ ಅವರಿಗೆ ಬಡಿಸುವ ಆಹಾರವು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ಅವರು ಕಾಡಿನಲ್ಲಿ ತಿನ್ನುವುದಕ್ಕಿಂತ ಹೆಚ್ಚು ಪೌಷ್ಠಿಕಾಂಶವನ್ನು ಹೊಂದಿರುತ್ತದೆ. == ಆನೆಗಳನ್ನು ಆರಿಸುವುದು == ದಸರಾ ಆನೆಗಳನ್ನು ಸಾಮಾನ್ಯವಾಗಿ ಆನೆ ತರಬೇತುದಾರರು ಖೆಡ್ಡಾ ಕಾರ್ಯಾಚರಣೆಯ ಮೂಲಕ ಹಿಡಿಯುತ್ತಾರೆ. ಒಡೆಯರ ಆಳ್ವಿಕೆಯಲ್ಲಿ, ಹೀಗೆ ಹಿಡಿದ ಆನೆಗಳನ್ನು ಶಕ್ತಿ, ವ್ಯಕ್ತಿತ್ವ ಮತ್ತು ಚಾರಿತ್ರ್ಯಕ್ಕಾಗಿ ತೆರೆದ ಮೈದಾನದಲ್ಲಿ ಪರೀಕ್ಷಿಸಲಾಗುತ್ತದೆ. ನಡೆಯುವ ಶೈಲಿಗಳು, ಅವುಗಳ ಅರೆವಳಿಕೆಯೆಡೆಗಿನ ದೌರ್ಬಲ್ಯಗಳು, ಮುಖದ ವರ್ಚಸ್ಸು ಆಯ್ಕೆಗೆ ಪರಿಗಣಿಸಲಾದ ಕೆಲವು ಅಂಶಗಳಾಗಿವೆ. ನಂತರ ಆಯ್ಕೆಯಾದ ಆನೆಗಳಿಗೆ ಉತ್ಸವಕ್ಕೆ ತರಬೇತಿ ನೀಡಲಾಗುತ್ತದೆ. ತರಬೇತಿಯ ಉಸ್ತುವಾರಿಯನ್ನು ರಾಜನೇ ನೋಡಿಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಕೈಬಿಟ್ಟ ಎಳೆಯ ಆನೆಗಳಿಗೂ ದಸರಾ ತರಬೇತಿ ನೀಡಲಾಗುತ್ತದೆ == ವಾಸಸ್ಥಾನ == ವರ್ಷದ ಉಳಿದ ಸಮಯದಲ್ಲಿ ಆನೆಗಳ ವಾಸಸ್ಥಾನವು ಸಾಮಾನ್ಯವಾಗಿ ಅವುಗಳ ತರಬೇತಿ ಶಿಬಿರಗಳು ಮತ್ತು ಸುತ್ತಮುತ್ತಲಿನ ರಾಷ್ಟ್ರೀಯ ಉದ್ಯಾನವನಗಳು ಆಗಿವೆ . ದುಬಾರೆ, ಹೆಬ್ಬಳ್ಳ, ಮೂರ್ಕಲ್, ಕಲ್ಲಲ್ಲ, ನಾಗರಹೊಳೆ, ವೀರನಹೊಸಹಳ್ಳಿ, ಮೇಟಿಕುಪ್ಪೆ, ಸುಂಕದಕಟ್ಟೆ, ಬಂಡೀಪುರ, ಮೂಲೆಹೊಳೆ, ಕೆ.ಗುಡಿ ಮತ್ತು ಭೀಮೇಶ್ವರಿಯಲ್ಲಿ ಸುಮಾರು ೭೦ ಪಳಗಿದ ಆನೆಗಳು ವಿಶೇಷ ಶಿಬಿರಗಳಲ್ಲಿವೆ. ಸುಮಾರು ೨೪೦ ಮಾವುತರು ಮತ್ತು ಕಾವಾಡಿಗಳು ಈ ಆನೆಗಳ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಅವರೊಂದಿಗೆ ಬಾಂಧವ್ಯವನ್ನು ಬೆಳೆಸುತ್ತಾರೆ. == ಆನೆಗಳು == ದಸರಾ ಆನೆಗಳಿಗೆ ಕನ್ನಡದಲ್ಲಿ ಹೆಸರಿಡಲಾಗಿದೆ ಮತ್ತು ಸಾಮಾನ್ಯವಾಗಿ ಹಿಂದೂ ದೇವರುಗಳು ಮತ್ತು ಐತಿಹಾಸಿಕ ವ್ಯಕ್ತಿಗಳ ಹೆಸರುಗಳನ್ನು ಹೊಂದಿರುತ್ತದೆ. ಆನೆಗಳಾದ ದ್ರೋಣ ಮತ್ತು ಬಲರಾಮ ಅವರು ಒಟ್ಟು ೩೦ ವರ್ಷಗಳ ಕಾಲ ಚಿನ್ನದ ಅಂಬಾರಿಯಲ್ಲಿ ನೆಲೆಗೊಂಡಿರುವ ಚಾಮುಂಡೇಶ್ವರಿ ದೇವತೆಯ ವಿಗ್ರಹವನ್ನು ಹೊತ್ತಿದ್ದರು. ೧೯೯೮ ರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ದ್ರೋಣನಿಗೆ ವಿದ್ಯುತ್ ಸ್ಪರ್ಶಿಸಿದ ನಂತರ ಬಲರಾಮ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ವಹಿಸಿಕೊಂಡಿತು. ಬಲರಾಮನಿಗೆ ೧೩ ವರ್ಷಗಳ ನಂತರ ನಿವೃತ್ತಿ ನೀಡಲಾಯಿತು. ೨೪ ಅಕ್ಟೋಬರ್ ೨೦೧೨ ರಂದು ಮೈಸೂರಿನಲ್ಲಿ ನಡೆದ ದಸರಾ ೨೦೧೨ ರ ಜಂಬೂ ಸವಾರಿ ಮೆರವಣಿಗೆಯಲ್ಲಿ ೫೨ ವರ್ಷ ವಯಸ್ಸಿನ ಅರ್ಜುನನು ಬಲರಾಮನ ಬದಲಾಗಿ ಚಿನ್ನದ ಅಂಬಾರಿಯನ್ನು ಹೊತ್ತನು. ಭರತ, ಕಂಠಿ, ಗಾಯತ್ರಿ, ಕೋಕಿಲ, ಶ್ರೀರಾಮ, ಅಭಿಮನ್ಯು, ಗಜೇಂದ್ರ, ಬಿಳಿಗಿರಿರಂಗ, ವಿಕ್ರಮ್, ವರಲಕ್ಷ್ಮಿ ಮತ್ತು ಸರೋಜಿನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಇತರ ಆನೆಗಳು. == ವಿವಾದ == ದಸರಾ ಮೆರವಣಿಗೆಯು ಆನೆಗಳ ವಿವಾದಾತ್ಮಕ ಬಳಕೆಯನ್ನು ನಿಲ್ಲಿಸುವಂತೆ ಕಾರ್ಯಕರ್ತರು ಮತ್ತು ಪ್ರಚಾರಕರಿಂದ ಹೆಚ್ಚುತ್ತಿರುವ ಒತ್ತಡವನ್ನು ಎದುರಿಸುತ್ತಿದೆ. ಮೆರವಣಿಗೆಯ ಆನೆಗಳು, ಹಾಗೆಯೇ ಮಾವುತರು ಎಂದು ಕರೆಯಲ್ಪಡುವ ಅವುಗಳ ನಿರ್ವಾಹಕರು, ವರ್ಷಗಳಲ್ಲಿ ಹಲವಾರು ಆಘಾತಕಾರಿ ಘಟನೆಗಳಿಂದ ಸಾವನ್ನಪ್ಪಿದ್ದಾರೆ. ೨೦೧೮ ರಲ್ಲಿ, ಆನೆಗಳ ತರಬೇತಿ ಮೈದಾನದಿಂದ ಸೋರಿಕೆಯಾದ ದೃಶ್ಯಾವಳಿಗಳು ಆನೆಯೊಂದು ಸಂಕಷ್ಟದಲ್ಲಿ ತೂಗಾಡುತ್ತಿರುವುದನ್ನು ತೋರಿಸಿದೆ. ಇಂಟರ್ನ್ಯಾಷನಲ್ ಪ್ರೆಸ್ ವೀಡಿಯೊವನ್ನು ಹೃದಯ ವಿದ್ರಾವಕ ಎಂದು ಹೆಸರುನೀಡಿದ್ದು, ಮೆರವಣಿಗೆಯಲ್ಲಿ ಪ್ರದರ್ಶನ ನೀಡಲು ಆನೆಗಳು ಎರಡು ತಿಂಗಳ ಕಠಿಣ ತರಬೇತಿಯನ್ನು ಹೇಗೆ ಪಡೆಯಬೇಕು ಎಂಬುದರ ಬಗೆಗೆ ವರದಿಯನ್ನು ಮಾಡಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಮೈಸೂರುಸಮಾಚಾರ್ 2018-05-12 ವೇಬ್ಯಾಕ್ ಮೆಷಿನ್ ನಲ್ಲಿ. ಪೊಟ್ಪುರಿ ಹಿಂದೂ ಸುದ್ದಿ